ನಿನ್ನ ಗೈರುವಿನಲ್ಲಿ ನಾನು ನಿಶ್ಚಲ ಬರಿ ತೊಟ್ಟಿಲು
ಉಟ್ಟು
ಡುಗೆಯ ತುಂಬ ಚಿತ್ತಾರದ ಮಧು ಬಟ್ಟಲು!
ಕೊಕ್ಕರೆಗೆ ಕಾಲು ಸೋತಿಲ್ಲ ನೀರಿನಿಂದ ಹೊರಬೀಳಲು
ಮೀನಿಗೊ ಮನಸಿಲ್ಲ
ಕಾಡು ಕದ್ದು ಮುತ್ತಿಡಲು!
ಎಣ್ಣೆ ತುಪ್ಪ ಹಾಲು
ಜೇನೆಲ್ಲ ನೆತ್ತಿಯಿಂದೆರೆಯಲು
ದೇವರು ಕೂಡ ನಾಲಗೆ
ಚಾಚುತ್ತಿಲ್ಲ ರುಚಿ ನೋಡಲು!
ಕಳೆದಿರುಳಿನಿಂದ ನೀನಿಲ್ಲ ಸಾಕಿ ಮೊಗೆದು ಕೊಡಲು
ಮತ್ತೇಗೆ ನುಡಿಸುವುದು ಮತ್ತೇರದೆ ಕೊಳಲು!
No comments:
Post a Comment